ಮುಂಜಾವು

ಕತ್ತಲೆ ಮುಸುಗು
ಮೆಲ್ಲ ಮೆಲ್ಲಗೆ ಬಿಗಿತ ಕಳೆಯುತಿತ್ತು
ಒಳಗಿಂದೊಳಗೆ
ಬೆಳಕಿನ ತೆನೆಯು ಕಾಳುಗಟ್ಟುತಿತ್ತು.

ರಾತ್ರಿ ಬೆಳಗಿದ
ಚುಕ್ಕಿ ಚಂದ್ರರ ಬೆಳ್ಳಿ ಕರಗುತಿತ್ತು
ಲೋಕಾದ ಲೋಕವೆಲ್ಲ
ಹಿತಕರ ತಂಪಿನ ಮಾಡು ಹೊದಿಯುತಿತ್ತು.

ಅಮೃತ ನಿದ್ದೆ
ತೆಕ್ಕೆಯ ಸಡಿಸಲಿಸಿ ಜೀವ ಭಾವವು ಎಚ್ಚರವಾಗುತಿತ್ತು
ನವ ಚೈತನ್ಯದಾಯಿ
ಶುದ್ಧಗಾಳಿಯು ನವಿರಾಗಿ ನರ್ತಿಸತೊಡಗಿತ್ತು.

ಹೊಸತೊಂದು ದಿನದ
ತವಕದ ಬಾಳಿಗೆ ಪಕ್ಷಿ ಸಂಕುಲ ಸಿದ್ದವಾಗುತಿತ್ತು
ಅಂತೆಯೆ ಎಲ್ಲೆಡೆ
ಜೀವ ವ್ಯವಹಾರ ನಿಧಾನವಾಗಿ ಚಾಲನೆ ಪಡಿತಿತ್ತು.

ಅರಿವಿನ ಬೆಳಗು
ಎದೆ, ಮನ ತಟ್ಟಿ ಆತ್ಮವು ಮಲ್ಲಿಗೆಯಾಗುತಿತ್ತು
ಮೂಡಣ ದಿಗಂತ
ರತ್ನ ಕೆಂಪಿನ ಸಾಗರದಲ್ಲಿ ಓಕುಳಿಯಾಡುತಿತ್ತು.

ಕಾವುಳ ಕರಗಿ
ಹೋಮ ಧೂಮವಾಗಿ ಗುಳೆ ಹೋಗುತಿತ್ತು
ಸಸ್ಯ ಸಂಪದವು
ಮಂಜು ಹನಿಗಳ ಮುತ್ತುಗಳಿಂದ ಸಿಂಗಾರಗೊಳುತಿತ್ತು

ಮೂಡುವ ರವಿಯಲಿ
ಮಾತೆಯ ನೊಸಲಿನ ಮಂಗಳ ತಿಲಕದ ಶೋಭೆ ಏರುತಿತ್ತು
ದರ್ಶಕ ಮನಸು
ಆಲೌಕಿಕ ಚೆಲುವಿನ ರಸಪಾಕವನುಂಡು
ದಿವ್ಯಾನುಭೂತಿ ಹೊಂದುತಲಿತ್ತು.
*****

2 thoughts on “0

  1. ಧನ್ಯವಾದಗಳು ನಮ್ಮ ಊರು ಸಿರುಗುಪ್ಪ ಬಳ್ಳಾರಿ ಜಿಲ್ಲೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಂದು ಕೊಲೆ
Next post ಕೆಟ್ಟದೊಳ್ಳೆಯದೆಂದಿದೆಯಾ ? ಕಳ್ಳತನದೊಳಗೆ ?

ಸಣ್ಣ ಕತೆ

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಒಲವೆ ನಮ್ಮ ಬದುಕು

    "The best of you is he who behaves best towards the members of his family" (The Holy Prophet) ವಾರದ ಸಂತೆ.… Read more…

cheap jordans|wholesale air max|wholesale jordans|wholesale jewelry|wholesale jerseys